ಧಾರವಾಡ : ಪುಸ್ತಕ ಬಿಡುಗಡೆ

ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

1980 ರ ದಶಕದಲ್ಲಿ ರೈತ, ಕಾರ್ಮಿಕ, ದಲಿತ ಹಾಗೂ ಬಂಡಾಯ ಚಳುವಳಿಗೆ ಪ್ರೆರಣೆ ನೀಡಿದ, ಅಂದು ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಯಲ್ಲಿ ವಿಶಿಷ್ಠ ಪಾತ್ರವಹಿಸಿದ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಅವೈಜ್ಞಾನಿಕ ನೀರಿನ ಕರ ವಿರೋಧಿಸಿ ಆ ಪ್ರದೇಶದ ರೈತರು ನಡೆಸಿದ ನರಗುಂದ-ನವಲಗುಂದ ರೈತ ಬಂಡಾಯ ಕುರಿತು ಶಿಕ್ಷಕರಾಗಿದ್ದುಕೊಂಡು ಸ್ವತಃ ಈ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿ.ಎಸ್.ಸೊಪ್ಪಿನ ಬರೆದಿರುವ ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ ಪುಸ್ತಕ ಬಿಡುಗಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಉಪನ್ಯಾಸ-ಸಂವಾದ ಕಾರ್ಯಕ್ರಮ ಜನೇವರಿ-13 ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಚಿಂತನ ಪುಸ್ತಕ ಬೆಂಗಳೂರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ, ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆಯಿತು.
ಜನ ಚಳುವಳಿಯಿಂದ ಮಾತ್ರ ಸಾಧ್ಯ:
ಖ್ಯಾತ ಅಂಕಣಕಾರ, ಪ್ರಜಾವಾಣಿ ಸಹ ಸಂಪಾದಕ ದಿನೇಶ್ ಅಮಿನಮಟ್ಟು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, 80ರ ದಶಕದ ಚಳುವಳಿಯ ಪ್ರಖರತೆ ಇಂದು ಕಾಣುತ್ತಿಲ್ಲ. ಕಾರಣಗಳನ್ನು ರೈತ ಸಂಘಟನೆಗಳು ವಿಮರ್ಶೆಮಾಡಿಕೊಳ್ಳಬೇಕು. ನಮ್ಮನ್ನಾಳುವವರು ಬರೀ ಗುಲಾಮರು. ಅವರ ಮಾಲೀಕರು ಬೇರೆಯಾಗಿದ್ದಾರೆ. ಉದಾರೀಕರಣ ನೀತಿಗಳ ಪರಿಣಾಮವಾಗಿ ಇಂದು ಅತ್ಯಂತ ಗಂಭೀರವಾದ ಸಮಸ್ಯೆಗಳು ಉಲ್ಬಣಗೊಂಡಿವೆ. ರೈತರಿಗೆ ತಮ್ಮ ಶತ್ರುಗಳನ್ನು ಗುರುತಿಕೊಳ್ಳಲಾಗುತ್ತಿಲ್ಲ. ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ಅದರೊಂದಿಗೆ ಬದ್ದತೆಯ, ಸಂಘಟಿತ ವಿಶಾಲವಾದ ಜನ ಚಳುವಳಿ ಮುಖಾಂತರ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಅನ್ನದಾತ ಸಾವಿನ ದವಡೆಗೆ:

ದುಡಿಯುವ ಕೈಗಳಿಗೆ ಭೂಮಿ ಇಲ್ಲ. ಉದ್ಯಿಮೆದಾರರಿಗೆ ಸಾವಿರಾರು ಎಕರೆ ಭೂಮಿ ನೀಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಖಂಡಿತಾ ಆಹಾರ ಭದ್ರತೆ ಕಾಡದಿರದು. ಕೃಷಿ ಬಿಕ್ಕಟ್ಟಿನಿಂದ ಈವರೆಗೆ 2.5 ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ಅನ್ನದಾತ ಸಾವಿನ ದವಡೆಗೆ ತಳ್ಳಲ್ಪಡುತ್ತಿದ್ದಾನೆ.

ಕೃಷಿ ಕ್ಷೇತ್ರದಲ್ಲಿ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹಾಗೂ ಇತ್ತೀಚಿಗೆ ಕಾನೂನುಗಳಿಗೆ ತಿದ್ದುಪಡೆ ಮಾಡಲು ಹೊರಟಿರುವದು ರೈತರನ್ನು, ಕಾರ್ಮಿಕರನ್ನು, ಸಣ್ಣ ವರ್ತಕರನ್ನು ಬೀದಿಗೆ ತಳ್ಳುವ ಬಂಡವಾಳಶಾಹಿ ತಿಮಿಂಗಲಗಳ ಹುನ್ನಾರವಾಗಿದೆ. ಈ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಪೈಪೋಟಿ ನಡೆಸಿವೆ. ಹೀಗಾಗಿ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಮುಂದಾಗಬೇಕಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ  ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಉಪನ್ಯಾಸ ನೀಡುತ್ತಾ ಮಾತನಾಡಿದರು. ನಂತರ ಸಂವಾದ ನಡೆಯಿತು.

ಪುಸ್ತಕ ಪರಿಚಯವನ್ನು ಸಾಹಿತಿ ಸತೀಶ ಕುಲಕರ್ಣಿ ಮಾಡಿದರು. ಅಂದಿನ ರೈತ ಚಳುವಳಿಯ ಮುಖಂಡತ್ವ ವಹಿಸಿದ್ದ ವಿ.ಎನ್.ಹಳಕಟ್ಟಿ, ಎಸ್.ಎಫ್.ಕಪ್ಪಣ್ಣವರ, ಶಿವದೇವಗೌಡ ಪಾಟೀಲ ಹಾಗೂ ನಿತ್ಯಾನಂದಸ್ವಾಮಿ ಉಪಸ್ಥಿತರಿದ್ದರು. ಹಿರಿಯ ರೈತ ಮುಖಂಡ ವಿ.ಪಿ.ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಚ್.ಆಯಿ ಸ್ವಾಗತಿಸಿದರು, ಮಹೇಶ ಪತ್ತಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ|| ಲಿಂಗರಾಜ ಅಂಗಡಿ ವಂದಿಸಿದರು. ಸವದತ್ತಿ, ಅಳಗವಾಡಿ, ರಾಮದುರ್ಗ, ಬೆಳವಣಕಿ ನರಗುಂದ, ನವಲಗುಂದ ರೈತರು, ಕಾರ್ಮಿಕ, ವಿದ್ಯಾರ್ಥಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

-ಮಹೇಶ ಪತ್ತಾರ  

‘Their exchanges are still relevant’

Staff Reporter

Public debates and exchanges between Mahatma Gandhi and Rabindranath Tagore in the 1920s and 1930s continue to be extremely relevant to many aspects of our public life, noted litterateur Baraguru Ramachandrappa has said.

He was speaking at the book release of ‘Mahatma Mattu Gurudeva Samvada’, organised by publisher Chintana Pustaka and Samudaya. Mr. Ramachandrappa said that the exchanges were also a “shining example” of how public debates on various topics should be conducted.

Apart from organising documents of this important discourse topic-wise to facilitate re-reading for Kannada readers, the book also contains analyses of the discourse by eminent thinkers such as the Nobel laureate and renowned economist Amartya Sen, historian Sabyasachi Bhattacharya and selected excerpts from poems on Tagore and Gandhiji by Kannada poets.

This has enhanced the value of the book, Mr. Ramachandrappa remarked.

http://www.thehindu.com/todays-paper/tp-national/tp-karnataka/article2550118.ece



ಭಾಗ-೧
(ಪುಟ ೩೧ರಿಂದ ೧೬೯)

ಗಾಂಧೀಜಿ-ಟಾಗೋರ್ ಸಂವಾದದ ದಾಖಲೆಗಳು

ಅ.  ಸ್ವರಾಜ್ಯ ಮತ್ತು ಅಸಹಕಾರ ಚಳುವಳಿ
ಆ.  ಚರಕಾಂದೋಲನ
ಇ.  ಉಪವಾಸ ಸತ್ಯಾಗ್ರಹ
ಈ.  ನಂಬಿಕೆ-ಮೂಢನಂಬಿಕೆ
ಉ. ಪ್ರಾರ್ಥನಾ ಮಂದಿರ, ಮತಾಂತರ ಇತ್ಯಾದಿ

ಭಾಗ-೨
(ಪುಟ ೧೭೧ ರಿಂದ ೨೯೯)

ಗಾಂಧೀಜಿ-ಟಾಗೋರ್ ಸಂವಾದದ ವಿಶ್ಲೇಷಣೆ

೧.  ಮಹಾತ್ಮ ಮತ್ತು ಕವಿ : ಸಂವಾದ (೧೯೧೫-೧೯೪೧)
- ಪ್ರೊ. ಸಬ್ಯಸಾಚಿ ಭಟ್ಟಾಚಾರ್ಯ
೨.  ಟಾಗೋರ್ ಮತ್ತು ಅವರ ಭಾರತ
- ಪ್ರೊ. ಅಮಾರ್ತ್ಯ ಸೇನ್
೩. ರಾಜಕಾರಣ ಮತ್ತು ಜನತೆ: ಸ್ವರಾಜ್ಯ ಮತ್ತು ಅಸಹಕಾರ  ಕುರಿತು ರವೀಂದ್ರನಾಥರ ವಿಮರ್ಶೆ (೧೯೧೫-೧೯೨೨)
- ಪ್ರೊ. ಮಾಲಿನಿ ಭಟ್ಟಾಚಾರ್ಯ
೪. ಗಾಂಧೀಜಿ-ಟಾಗೋರ್ ವಾಗ್ವಾದ : ತಾತ್ವಿಕ ಭೂಮಿಕೆಗಳು
- ಪ್ರೊ. ಬಸವರಾಜ ಕಲ್ಗುಡಿ
೫. ಮಹಾತ್ಮ, ಗುರುದೇವ ಮತ್ತು ನಾವು
- ವಸಂತರಾಜ ಎನ್.ಕೆ.
೬. ಟಾಗೋರರ ಸಹಕಾರ ಚಳುವಳಿ
- ಶೂದ್ರ ಶ್ರೀನಿವಾಸ್
೭. ವಿಶ್ವ ಭಾರತಿ-ಸ್ವತಂತ್ರ ಭಾರತದ ಬಗ್ಗೆ ರವೀಂದ್ರರ ಕನಸಿನ ಬೀಜರೂಪ
- ಜಿ.ಎನ್.ನಾಗರಾಜ್


ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/-

ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ.

 

ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

`ಆಯಿಷಾ’ – ತನ್ನ ತೀರ್ವ ಮಟ್ಟದ ಕಲಿಕೆಯ ಆಸಕ್ತಿಯಿಂದ ಅದ್ಯಾಪಕ ವೃಂದದ ತಿರಸ್ಕಾರವನ್ನು ಹೊಂದಿ ಕಲಿಕೆಯ ಆಸಕ್ತಿಯನ್ನು ಬಲಿಕೊಡಲು ಇಚ್ಛಿಸದೇ ಅಧ್ಯಾಪಕ ವೃಂದದ ಹೊಡೆತದಿಂದ ತಪ್ಪಿಸಿಕೊಳ್ಳಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸಿ ಬಲಿಯಾದ ಹುಡುಗಿಯ ಕತೆ.

ಸಾರ್ವಕಾಲಿಕ ಹಾಗೂ ಎಲ್ಲಾ ವಯೋಮಾನದವರೂ ಓದಲು ಇಚ್ಛಿಸುವ ಪುಸ್ತಕ ಪ್ರಾಚೀನ ಚೀನೀ ಪುಟ್ಟ ಕತೆಗಳ ಸಂಗ್ರಹ `ಬಿರುಕು ಬಿಟ್ಟ ಗೋಡೆ ಮತ್ತು ಇತರ ಚೀನಾದ ಪ್ರಾಚೀನ ಕತೆಗಳು

`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’ ಪುಸ್ತಕವು ಯುವ ಹೃದಯಗಳ ನಾಡಿ ಮಿಡಿತ ಭಾರತಮಟ್ಟದ ಹುತಾತ್ಮ `ಭಗತ್ ಸಿಂಗ್’ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹುತಾತ್ಮ `ಚೆ’ ಇವರಿಬ್ಬರ ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳ ಸಂಗ್ರಹ.

Next Page »

Follow

Get every new post delivered to your Inbox.